ಕೆರೆಮನೆಗೆ ಕೃಷ್ಣ ನಾಯರ್ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 29 , 2013
|
ಬೆ೦ಗಳೂರು , ಆಗಸ್ಟ್ 29 , 2013
|
ಕೆರೆಮನೆಗೆ ಕೃಷ್ಣ ನಾಯರ್ ಪ್ರಶಸ್ತಿ
ಬೆ೦ಗಳೂರು :
ಖ್ಯಾತ ನಟಿ ಹಾಗೂ ನೃತ್ಯಗಾರ್ತಿ ವೈಜಯಂತಿಮಾಲಾ ಬಾಲಿ ಅವರು ಕಥಕ್ಕಳಿಯಲ್ಲಿ ದೊಡ್ಡ ಹೆಸರಾದ ಮತ್ತೂರು ಗೋವಿಂದಕುಟ್ಟಿ ಹಾಗೂ ಕಲಾಮಂಡಲಂ ವಾಸು ಪಿಶಾರೊಡಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಕ್ಯಾಪ್ಟನ್ ಸಿ.ಪಿ. ಕೃಷ್ಣ ನಾಯರ್ ಅವರ ಹೆಸರಿನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಅಂಡ್ ಆರ್ಟ್ಸ್ (ಬಸಿಕೆಎ) ವಾರ್ಷಿಕ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈಜಯಂತಿಮಾಲಾ ಬಾಲಿ ಸೇರಿದಂತೆ ವಿಮಲಾ ರಂಗಾಚಾರ್ ಹಾಗೂ ರಾಧಾಕೃಷ್ಣನ್ ನಂಬೂದಿರಿ ಅವರನ್ನು ಸಮಾಜಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು.
ಇವರೊಂದಿಗೆ ಮಾನಸಿಕ ಆರೋಗ್ಯ ಕುರಿತು ಸೇವೆ ಸಲ್ಲಿಸುತ್ತಿರುವ ‘ದಿ ಮೆಡಿಕೊ ಪ್ಯಾಸ್ಟೋರಲ್ ಒಕ್ಕೂಟ’ ಹಾಗೂ ಅಬಲಾಶ್ರಮ ನಡೆಸುತ್ತಿರುವ ಸೇವಾಸದನ ಸ್ವಯಂ ಸೇವಾ ಸಂಸ್ಥೆಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಸ್ಟೀಫನ್ ದೇವಸ್ಸಿ ಹಾಗೂ ವೃಂದ ಹಾಗೂ ಮನೋಜ್ ಜಾರ್ಜ್ ಅವರ ಪಿಟೀಲು ವಾದನದ ಕಛೇರಿಯು ಎಲ್ಲರನ್ನೂ ರಂಜಿಸಿತು.
|
|
|